Chiranthana Development Foundation-cdf
Swara chiranthana singers team Bangalore
Kalike
27/09/2024
ಹಾಡು ಹೊಸ ಹಾಡು ನೀವೆಲ್ಲ ಬನ್ನಿ ಹೊಸ ಗಾಯಕರ ಧ್ವನಿ ಕೇಳೋಣ, ಹೊಸ ರಾಗ ಸಂಯೋಜಕರ ಪರಿಚಯ ಮಾಡಿಕೊಳ್ಳೋಣ.
01/07/2024
ನಾಡು ನುಡಿ ನಿತ್ಯೋತ್ಸವ
ಬೆಂಗಳೂರು; ನಗರದ ಚಿರಂತನ ಅಭಿವೃದ್ಧಿ ಪ್ರತಿಷ್ಠಾನ 2024ರ ಸಾಲಿನ ನಾಡು ನುಡಿ ನಿತ್ಯೋತ್ಸವ*
‘ಕುಮಾರ ಸಂಭವ’ ಕನ್ನಡ ಅವತರಣಿಕೆಯ
ಲೋಕಾರ್ಪಣೆ ಹಾಗೂ ಕರುನಾಡ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ .30, 2024 ರಂದು ನಡೆಯಿತು.
ಕೆಂಪೇಗೌಡ ನಗರ ಗವಿಪುರದಲ್ಲಿರುವ ಉದಯಭಾನು ಕಲಾ ಸಂಘದಲ್ಲಿ ಭಾನುವಾರ ಬೆಳಗ್ಗೆ ಹತ್ತುಗಂಟೆಗೆ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಾಲ್ಕು ಸಾಧಕರಿಗೆ ‘ಕರುನಾಡ ಸಾಧಕರತ್ನ’ ಪ್ರಶಸ್ತಿಯನ್ನುನೀಡಿ ಪುರಸ್ಕರಿಸಲಾಯಿತು. ಡಾ ಅಶ್ವಿನಿ ಭಟ್ (ಕ್ಷೇತ್ರ: ಕಲೆ ಮತ್ತು ಸಂಸ್ಕೃತಿ), ಶ್ರೀ ಶ್ರೀಕಾಂತ ಪತ್ರೇಮರ (ಕ್ಷೇತ್ರ : ಸಾಹಿತ್ಯ ಮತ್ತು ಸಂಘಟನೆ), ಶ್ರೀಮತಿ ಆಶಾ ರಮೇಶ್ (ಕ್ಷೇತ್ರ: ಭಾರತೀಯ ಸಂಸ್ಕೃತಿ) ಮತ್ತು ಶ್ರೀ ವಿಪಿನ್ ಬದೋರಿಯಾ (ಕ್ಷೇತ್ರ : ಶಿಲ್ಪಕಲೆ) ರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಖ್ಯಾತ ಹಿನ್ನೆಲೆ ಗಾಯಕಿ ಸುಮಾ ಎಲ್.ಎನ್. ಶಾಸ್ತ್ರಿ, ಗಾಯಕ ವೀರೇಶ ಎಂಪಿಎಂ ಮತ್ತು ಅನಿತಾ ಮುತ್ತುಕುಮಾರ್ ಭಾವಲಹರಿ- ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ವಿಶೇಷ ಗಾಯನದಲ್ಲಿ ಬಹುಮುಖಿ ಗಾಯಕ ವಿಶ್ವೇಶ್ ಭಟ್ ತಮ್ಮ ರಾಗಗಳ ಮೂಲಕ ಶಾಸ್ತ್ತೀಯ, ಸುಗಮ ಸಂಗೀತ ರಾಗಮಾಲಿಕೆಯಲ್ಲಿ ಸಭಿಕರನ್ನು ರಂಜಿಸಿದರು. ತಬಲಾದಲ್ಲಿ ಲೋಕೇಶ್, ಕೀ ಬೋರ್ಡ್ ನಲ್ಲಿ ಅರಭಿ ಸಾಥ್ ನೀಡಿದರು.
ಸರ್ವರಿಗೂ ಸುಸ್ವಾಗತ
Click here to claim your Sponsored Listing.
Website
Address
Bangalore