Shikhar Manjunath

Shikhar Manjunath

Share

Free consultatiin, Freeeee astrology, numerology, vasthu, mantra reading

28/06/2023
23/03/2023

ಅಹಂಭರಿತವಾದ ಮನಸ್ಸು ತನ್ನ ಶಕ್ತಿಯನ್ನೆಲ್ಲ ಕಳೆದುಕೊಂಡು, ಚಿತ್ರಹಿಂಸೆ ಮಾಡುವ ಚಿಂತೆಗಳನ್ನು ಎದುರಿಸಲಾಗದೆ ದುರ್ಬಲವಾಗುತ್ತದೆ. ಅಹಂಮುಕ್ತವಾದ ಮನಸ್ಸು ಸಂತೋಷವಾಗಿರುತ್ತದೆ.

ಶ್ರೀ ರಮಣರ ಉವಾಚ

18/03/2023

ಬುದ್ಧಿಗೆ ಬಂದ ಸಂಶಯಕ್ಕೆ ಪರಿಹಾರವಿಲ್ಲ.
ಅಸೂಯೆ ಪಡುವವರಿಗೆ ನಿದ್ರೆ ಸರಿಯಾಗಿ ಬರುವುದಿಲ್ಲ.ಅಹಂಕಾರ ಪಡುವವರಿಗೆ ಸರಿಯಾದ ಸ್ನೇಹಿತರಿರುವುದಿಲ್ಲ. ಅನುಮಾನ ಪಡುವವರಿಗೆ ಸರಿಯಾದ ಜೀವನವೇ ಇರುವುದಿಲ್ಲ.
ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ । ನಾಯಂ ಲೋಕೋSಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ॥೪೦॥
ಜ್ಞಾನವಿಲ್ಲದ, ಶ್ರದ್ಧೆ ಇಲ್ಲದ ಅಜ್ಞಾನಿಗಳು ನಿರಂತರ ಸಂಶಯದಲ್ಲೇ ಬದುಕುತ್ತಾರೆ. ಜ್ಞಾನ ಮತ್ತು ಶ್ರದ್ಧೆ ಇಲ್ಲದಾಗ ಅಲ್ಲಿ ಸಂಶಯ ಬೆಳೆಯಲಾರಂಭಿಸುತ್ತದೆ. ಆ ಸಂಶಯ ಮನಸ್ಸನ್ನು ಆಕ್ರಮಿಸಿ ನಂತರ ಚಿತ್ತವನ್ನು ತಲುಪುತ್ತದೆ. ಬುದ್ಧಿಗೆ ಬಂದ ಸಂಶಯಕ್ಕೆ ಪರಿಹಾರವಿಲ್ಲ. ಅದು ನಮ್ಮನ್ನು ಅಧಃಪಾತಕ್ಕೆ ಕೊಂಡೊಯ್ಯುತ್ತದೆ. ಇದರಿಂದ ಅಂತವರಿಗೆ ಇಹವಿಲ್ಲ, ಪರವಿಲ್ಲ, ಎಂದೆಂದೂ ನೆಮ್ಮದಿ ಇಲ್ಲ.
ಈರ್ಷ್ಯೀ ಘೃಣೀ ತ್ವಸಂತೃಪ್ತಃ ಕ್ರೋಧನೋ ನಿತ್ಯ ಶಂಕಿತಃ।ಪರಭಾಗ್ಯೋಪಜೀವೀ ಚ ಷಡೇತೇ ದುಃಖಭಾಗಿನಃ॥
ಇತರರ ಬಗ್ಗೆ ಅಸೂಯೆ ಇದ್ದರೆ ತನ್ನಲ್ಲಿ ಎಷ್ಟು ಸಂಪತ್ತಿದ್ದರೂ ಅದನ್ನು ಅನುಭವಿಸಲು ಸಾಧ್ಯವಿಲ್ಲ. ಇತರರ ಸುಖವನ್ನು ಕಂಡು ಕರುಬುವುದರಲ್ಲೇ ಜೀವನ ಕಳೆದು ಹೋಗುತ್ತದೆ. ಜುಗುಪ್ಸೆ ಹೊಂದಿದವನಿಗೆ ಮುಂದೆಲ್ಲ ಕತ್ತಲಾಗಿಯೇ ಕಾಣಿಸುವುದು. ಮುಂದೊಂದು ದಿನ ನನಗೂ ಸುಖವಿದೆ ಎಂಬ ಆಶಾಭಾವನೆಯಿಲ್ಲದೆ ಅವಿವೇಕದಿಂದ ಇರುವ ಸುಖವನ್ನೂ ಕಳೆದುಕೊಳ್ಳುವನು. ತೃಪ್ತಿ ಇದ್ದರೆ ಅದಕ್ಕಿಂತ ಮಿಗಿಲಾದ ಸುಖವಿಲ್ಲ. ಕಷ್ಟ ಸುಖಗಳು ಜೀವನದಲ್ಲಿ ಇರುವುದೇ. ಅದನ್ನು ಅರಿಯದೆ ಪುರಂದರದಾಸರು ಹೇಳಿದಂತೆ ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರು ಮತ್ತಷ್ಟರಾಸೆ ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟಜೀವನದಾಸೆ ಇದ್ದರೆ ಇರುವ ಸುಖವನ್ನು ಅನುಭವಿಸುವುದು ಹೇಗೆ ಸಾಧ್ಯ? ಕೋಪವಿದ್ದವನಿಗೆ ವಿವೇಕವಿಲ್ಲ. ಹಿಂದು ಮುಂದು ಯೋಚಿಸದೆ ಮುನ್ನುಗ್ಗಿ ಕಷ್ಟಕ್ಕೊಳಗಾಗುತ್ತಾನೆ. ಕ್ಷಣಕಾಲ ತಾಳ್ಮೆವಹಿಸಿದರೆ ಮುಂದಿರುವ ಅನಾಹುತವನ್ನು ಖಂಡಿತಾ ತಪ್ಪಿಸಬಹುದು. ಸಂಶಯಾತ್ಮಾ ವಿನಶ್ಯತಿ. ಸಂಶಯವಿರುವುದು ಮನಸ್ಸಿನಲ್ಲಿ. ನಂಬಿಕೆಯಿರುವುದು ಅಂತರಾತ್ಮದಲ್ಲಿ. ಅಂತರಾತ್ಮದ ಬೆಳಕಿನಲ್ಲಿ ವಿವೇಚಿಸಿದರೆ ಸಂಶಯ ತಾನಾಗಿಯೇ ನಿವಾರಣೆಯಾಗುತ್ತದೆ. ಭಗವಂತನ ಅನುಗ್ರಹ ದೊರೆಯುತ್ತದೆ. ಅದು ಬಿಟ್ಟು ಎಲ್ಲವನ್ನೂ ಸಂಶಯದಿಂದಲೇ ಕಂಡರೆ ಸುಖವೆಲ್ಲಿಂದ ಸಿಗಬೇಕು? ತಾನು ಸಾಯಬೇಕು, ಸ್ವರ್ಗ ಪಡೆಯಬೇಕು. ಕಷ್ಟ ಪಟ್ಟು ಸಂಪಾದಿಸಿದರೆ ಅದರಿಂದಷ್ಟೇ ಸುಖ. ಇನ್ನೊಬ್ಬರ ಸೊತ್ತಿನಲ್ಲಿ ನಾವೆಷ್ಟು ದಿನ ಸುಖಪಡಬಹುದು? ಆದ್ದರಿಂದ ಈರ್ಷ್ಯೆ ಜುಗುಪ್ಸೆ ಉಳ್ಳವರು, ತೃಪ್ತಿಯಿಲ್ಲದವರು, ಕೋಪಿಗಳು, ಸಂಶಯಾತ್ಮರು,ಪರೋಪಜೀವಿಗಳು ಈ ಆರು ಮಂದಿ ನಿಶ್ಚಯವಾಗಿಯೂ ದುಃಖಭಾಜನರು.
OM SHRI RAMANA MAHARSHI NAMAH
OM SRI GURU RAGHVENDRAYA NAMAHA.

05/03/2023

ಸಂದರ್ಶಕ : ಮಹರ್ಷಿಗಳೇ, ತಾವು ದೇವರನ್ನು ನೋಡಿದ್ದೀರಾ?
ಮ :ನೋಡಲು ಏಕೆ ಬಯಸುತ್ತೀರಿ
ಸಂ : ತಾವು ದೇವರನ್ನು ಕಂಡಿದ್ದರೆ ನಾನೂ ಅವನನ್ನು ಕಾಣಲು ಸಹಾಯಮಾಡಿ.
ಮ :'ನಾನು ದೇವರನ್ನು ಕಾಣಬಯಸುತ್ತೇನೆ 'ಎಂದಿರಿ ನೀವು ಯಾರೆಂದು ಮೊದಲು ಹೇಳಿ.
ಸಂ : ನನ್ನ ಹೆಸರು ದೇವದತ್ತ ಶರ್ಮಾ.
ಮ :ಅದು ನಿಮ್ಮ ಹೆಸರು. ನೀವು ಯಾರು ಹೇಳಿ?
ಸಂ : ನಾನು ಶರ್ಮಾ ಎಂದು ಆಗಲೇ ಹೇಳಿದೆ. ನಾನು ಬ್ರಾಹ್ಮಣ.
ಮ :ಅದು ನಿಮ್ಮ ಜಾತಿ, ಅಷ್ಟೇ. ನೀವು ಯಾರು?
ಸಂ :ನಾನು ಕಾಲೇಜಿನ ಉಪನ್ಯಾಸಕ.
ಮ : ಅದು ನಿಮ್ಮ ಉದ್ಯೋಗ. ಆದರೆ ನೀವು ಯಾರು?
ಸಂ : ನಾನೊಬ್ಬ ಮನುಷ್ಯ.
ಮ : ಅದು ನಿಮ್ಮ ಜನ್ಮವಾಯಿತು. ನೀವು ಯಾರು?
ಸಂ : ನಾನು ಗಂಡಸು.
ಮ : ಅದು ನಿಮ್ಮ ಲಿಂಗವಾಯಿತು. ದೇವರನ್ನು ನೋಡಲು ಬಯಸುತ್ತಿರುವುದು ಯಾರು ಎಂದು ತಿಳಿಯಲು ಹೇಗೆ ಸಾಧ್ಯ? ದೇವರನ್ನು ಸಾಕ್ಷಾತ್ಕರಿಸಿ ಕೊಳ್ಳಬೇಕಾದರೆ ನೀವು ಯಾರು, ದೇವರನ್ನು ತಿಳಿಯಬಯಸುವರು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕಲ್ಲವೇ?
ಭಗವಾನರು ಸಂದರ್ಶಕರನ್ನು ನಿಜದ ನೆಲೆಗೆ ಕರೆದೊಯ್ಯುತ್ತಿದ್ದ ರೀತಿ ಇದು. ಮುಂದಿನ ಕ್ರಿಯೆಯನ್ನು ಸಾಧಕನೇ ಮುಂದುವರಿಸಬೇಕಾಗುತ್ತದೆ. ಶೋಧನಾಗ್ನಿಯ ಕಿಡಿ ಹೊತ್ತಿಸಿ ಬೆಳಕು ಕಾಣಲು ಪ್ರಚೋದಿಸುವುದು ಮಹರ್ಷಿಗಳ ವಿಧಾನ.

Want your business to be the top-listed Engineering Company in Bangalore?
Click here to claim your Sponsored Listing.

Telephone

Website

Address


Bangalore
560002