Sri Raghavendra Swami Vaibhava

Sri Raghavendra Swami Vaibhava

Share

Contact information, map and directions, contact form, opening hours, services, ratings, photos, videos and announcements from Sri Raghavendra Swami Vaibhava, Bangalore.

28/05/2026

ಶ್ರೀ ಮಂಚಾಲಮ್ಮ ಅಮ್ಮನವರ ಇಂದಿನ ದರ್ಶನ🙏🏻❤️

28/05/2026

Today's Sode Shri Vadirajuru Swamigalavara Moola Brindavana Alankara Darshana ! 28th May -2026 ! ॐ श्री वदिरज नमह ॐ.

28/05/2026

ಶ್ರೀ ರುದ್ರದೇವರ ದರ್ಶನ. ಮಂತ್ರಾಲಯ🙏🏻😍💐🙏🚩

Photos from Sri Raghavendra Swami Vaibhava's post 28/05/2026

28/05/2026

ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ.....

ಮಂತ್ರಾಲಯ ದೊರೆ ಕಲಿಯುಗ ಕಾಮಧೇನು ಶ್ರೀ ಗುರು ರಾಘವೇಂದ್ರಸ್ವಾಮಿಗಳ ಹಾಗೂ
ಶ್ರೀ ವಾದೀಂದ್ರ ತೀರ್ಥರ ಇಂದಿನ ಮೂಲ ವೃಂದಾವನ ಅಲಂಕಾರ ದರ್ಶನ. ಶುಭ ಗುರುವಾರ🙏🏻❤️🌼

28/05/2026

" ಭೇದೋಜ್ಜೀವನ "

ಭೇದವನ್ನು ತಿರಸ್ಕರಿಸಿ ಅಭೇದವನ್ನು ಎತ್ತಿ ಹಿಡಿಯುವ ಅನೇಕ ಅದ್ವೈತ ಗ್ರಂಥಗಳ ಖಂಡನಾರೂಪವಾಗಿದೆ.

ಈ "' ಭೇದೋಜ್ಜೀವನ " ಗ್ರಂಥಶ್ರೀ ವ್ಯಾಸರಾಜ ಗುರುಸಾರ್ವಭೌಮರು ಅಭೇದವನ್ನು ಖಂಡಿಸಿ ಭೇದವನ್ನು ಸಪ್ರಮಾಣವಾಗಿ ಸಾಧಿಸಿರುವರು.

" ಭೇದೋಜ್ಜೀವನ " ಗ್ರಂಥವು ಒಂದು ಸ್ವತಂತ್ರ ಗ್ರಂಥ.

" ಜಗದೊಡೆಯನಾದ ಶ್ರೀ ಮಹಾವಿಷ್ಣುವಿಗೆ ಜಯವಾಗಲಿ! "

ಎಂದು ಭಕ್ತರು ಸದಾ ಮೈಮನ ಉಬ್ಬಿ ಜಯಕಾರ ಮಾಡುತ್ತಾರೆ.

ಅದರಲ್ಲಿಯೇ ಪರಮ ಸುಖ ಕಾಣುತ್ತಾರೆ.

ಆದರೆ, ಅಭೇದ ಮತದಲ್ಲಿ ಇದಕ್ಕೆ ಅವಕಾಶವಿಲ್ಲ.

ಶ್ರೀ ಹರಿಯ " ಜಯ " ವೆಂಬುದು ಕಾಲ್ಪನಿಕ.

ಭಕ್ತರು ಕಲ್ಪಿಸಿಕೊಂಡಿದ್ದೆಂದು ಗ್ರಹಿಕೆ ಇದೆ.

ಪೂರ್ಣ ವಿಶ್ವಾಸ ತುಂಬಿದ ಹೃದಯದಿಂದ ಅವರು ಜಯಾಶಂಸನ ಮಾಡಲಾರರು.

ಅವರು ನೋಡುತ್ತಿರುವಂತೆ ನಿಃಸಂಕೋಚವಾಗಿ ಜಯಾಶಂಸನ ಮಾಡುವುದು ಭಕ್ತರಿಗೂ ಕಷ್ಟವೆ.

ಇದನ್ನು ಕಂಡು ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಶ್ರೀ ಪ್ರಹ್ಲಾದರಾಜರಂತೆ " ಶ್ರೀ ಮಹಾವಿಷ್ಣುವಿಗೆ ಜಯವಾಗಲಿ " ಎಂದು ಗಟ್ಟಿಯಾಗಿ ಜಯಾಶಂಸನ ಮಾಡಿದರು ಮತ್ತು ಅದರ ಸಮರ್ಥನೆಗಾಗಿ ಪಂಚಭೇದಗಳ ಉಜ್ಜೀವನ ಮಾಡಿದರು - ತಮ್ಮ " ಭೇದೋಜ್ಜೀವನ " ಗ್ರಂಥದಲ್ಲಿ.

" ದ್ವೈತವೇದಾಂತ " ವೆಂಬ ಶ್ರೀ ನರಸಿಂಹದೇವರ ಮೂರು ಕಣ್ಣುಗಳಂತಿರುವ - " ವ್ಯಾಸತ್ರಯ " ವೆಂದು ಪ್ರಸಿದ್ಧವಾದ - ನ್ಯಾಯಾಮೃತ, ತಾತ್ಪರ್ಯಚಂದ್ರಿಕಾ ಹಾಗೂ ತರ್ಕತಾಂಡವ ಗಳೆಂಬ ಮೂರು ಉದ್ಗ್ರಂಥಗಳನ್ನು ರಚಿಸಿ, " ನವೀನವ್ಯಾಸ " ರೆನಿಸಿದವರು ಶ್ರೀ ವ್ಯಾಸರಾಜ ಗುರುಸಾರ್ವಭೌಮರು.

ತರ್ಕ ರಸಿಕರಿಗೆ ಅಪ್ಯಾಯಮಾನವಾಗುವಂತೆ " ನವ್ಯನ್ಯಾಯ " ದ ಪ್ರೌಢ ಶೈಲಿಯಲ್ಲಿ " " ಭೇದೋಜ್ಜೀವನ " ವೆಂಬ ಸುಂದರವಾದ ಈ ಗ್ರಂಥವನ್ನೂ ರಚಿಸಿ ಅನುಗ್ರಹಿಸಿದ್ದಾರೆ.

ಅಭೇದ ಮತದವರ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನು ಬಂದನ್ನೂ ಬಿಡದೆ, ಅವರೂ ಮೆಚ್ಚುವಂತೆ ಹಾಗೂ ನೋಡಿ ಅಚ್ಚರಿಪಡುವಂತೆ ಅನುವಾದ ಮಾಡಿ ಸಮರ್ಥವಾಗಿ ಖಂಡನೆ ಮಾಡಿದ್ದಾರೆ.

ನ್ಯಾಯಾಮೃತದ ಗ್ರಂಥದ ಮೂಲ " ನವ್ಯನ್ಯಾಯ " ಭಾಷೆಯಲ್ಲಿ ವಾದ - ಪ್ರತಿವಾದಗಳ ಪರಂಪರೆಯನ್ನು ಹುಟ್ಟು ಹಾಕಿದ ವಿಭೂತಿಪುರುಷರು ಶ್ರೀ ವ್ಯಾಸರಾಜ ಗುರುಸಾರ್ವಭೌಮರು.

ಪಂಡಿತ ಮಂಡಲಿ ಇಡೀ ಒಮ್ಮತದಿಂದ ಇವರಿಗೆ ತಲೆಬಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ.

ಇಂಥಾ ಉತ್ಕೃಷ್ಟವಾದ ಗ್ರಂಥವನ್ನು...

ಸಾಕ್ಷಾತ್ ಶ್ರೀ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು -

ವಿದ್ಯಾರ್ಥಿಗಳಿಗೂ - ಅಧ್ಯಾಪಕರಿಗೂ ಅನುಕೂಲವಾಗಲೆಂದು ಶ್ರೀಮಠದಿಂದ ಅಚ್ಛ ಕನ್ನಡದಲ್ಲಿ ಸರಳ ಸುಂದರವಾಗಿ " ಭೇದೋಜ್ಜೀವನ " ಗ್ರಂಥವು ಅನುವಾದಗೊಂಡು ಪ್ರಕಾಶನಗೊಂಡಿದೆ.

ಈ " ಭೇದೋಜ್ಜೀವನ " ಗ್ರಂಥವು -

" ಮಂತ್ರಾಲಯ ಮಾಹಿತಿ ಕೇಂದ್ರ " ದಲ್ಲಿ ಮಾರಾಟಕ್ಕೆ ಲಭ್ಯವಿದೆ.

ಬೆಲೆ ₹. 500.00

ಹೆಚ್ಚಿನ ಮಾಹಿತಿಗಾಗಿ 8088775981ನ್ನು ಸಂಪರ್ಕಿಸಿ.

Photos from Sri Raghavendra Swami Vaibhava's post 27/05/2026

Devagiri Sri Raghavendra Swamy Mutt Banashankari 2nd stage May 27 Ekadashi 🙏🙏

Want your business to be the top-listed Media Company in Bangalore?
Click here to claim your Sponsored Listing.

Website

Address


Bangalore